Tuesday, July 20, 2010
ಅದೃಷ್ಟಹೀನರು
ನೆನಪಿನ ಅವಶೇಷಗಳ ಮೇಲೆ
ಭವಿಷ್ಯ ಕಟ್ಟಲು ಹೊರಟವರು
ನೆನಪುಗಳಲ್ಲೇ ಕಳೆದುಹೋದರು,
ಭೂತದ ದಿನಗಳೇ ವೈಭವದ
ದಿನಗಳೆಂದು ವರ್ತಮಾನದ
ಖುಷಿಗಳ ಕಳೆದುಕೊಂಡರು.....
Sunday, April 25, 2010
ವಾಸ್ತವ
ಬದಲಾದರೆ ಸಾಕೇ ವಾಸ್ತು
ಬದಲಾದಿತೆ ವರ್ತಮಾನ
ಬದಲಾದೀತೆ ಭವಿಷ್ಯ?
ಬದಲಾಗದಿರೆ ಒಳಗಿನ ವಸ್ತು
ಬದಲಾದಿತೆ ವರ್ತಮಾನ
ಬದಲಾದೀತೆ ಭವಿಷ್ಯ?
ನಮ್ಮೊಳಗಿನ ವಸ್ತು ಸರಿ ಇರದಿರೆ
ಹೊರಗಿನ ವಾಸ್ತು ಸರಿಪಡಿಸೆ
ಸರಿಯಾದೀತೆ ವರ್ತಮಾನ
ಬದಲಾದೀತೆ ಭವಿಷ್ಯ?
ಬದಲಾದಿತೆ ವರ್ತಮಾನ
ಬದಲಾದೀತೆ ಭವಿಷ್ಯ?
ಬದಲಾಗದಿರೆ ಒಳಗಿನ ವಸ್ತು
ಬದಲಾದಿತೆ ವರ್ತಮಾನ
ಬದಲಾದೀತೆ ಭವಿಷ್ಯ?
ನಮ್ಮೊಳಗಿನ ವಸ್ತು ಸರಿ ಇರದಿರೆ
ಹೊರಗಿನ ವಾಸ್ತು ಸರಿಪಡಿಸೆ
ಸರಿಯಾದೀತೆ ವರ್ತಮಾನ
ಬದಲಾದೀತೆ ಭವಿಷ್ಯ?
ಕುದುರೆಯ ಸ್ವಗತ...
ನಾನಿಂದು ಮುಕ್ತನಾದೆ
ಸ್ವತಂತ್ರನಾದೆ
ಇನ್ನಾರ ಹಂಗು ನನಗಿಲ್ಲ.
ಜೀತ ಮಾಡಬೇಕೆಂದಿಲ್ಲ..
ರಣರಂಗದಲಿ ವೀರರೊಡನೆ
ಸ್ವರ್ಗ ಸೇರುವ ಗತಿ ಇಂದು ನನಗಿಲ್ಲ
ಮೂಟೆಗಳ ಹೊತ್ತು ಬೆಟ್ಟ ಹತ್ತುವ
ದಿನಗಳು ಈಗಿಲ್ಲ
ಕಣ್ಗಾಪು ಕಟ್ಟಿ ಬಂಡಿಯನೇಕೆ ಎಳೆಯಲಿ..
ಬಂದಿವೆ ರಿಕ್ಷಾ ಟ್ರಾಕ್ಟರುಗಳು.
ಬೈಕು ಸ್ಕೂಟರುಗಳು..
ಯಾರದೋ ಪ್ರತಿಷ್ಟೆಗಾಗಿ..
ಯಾರೋ ಕಟ್ಟಿದ ಪಣದ ಹಣೆಬರಹವಾಗಿ
ಓಡಬೇಕೆಂದಿಲ್ಲ ಮೈದಾನದಲಿ..
ಇರುವರು ನನ್ನ ಬದಲಿಗೆ
ಸೆಹ್ವಾಗ್ ಧೋನಿಯರು
ದ್ರಾವಿಡ್ ತೆಂಡುಲ್ಕರರು...
ಸ್ವತಂತ್ರನಾದೆ
ಇನ್ನಾರ ಹಂಗು ನನಗಿಲ್ಲ.
ಜೀತ ಮಾಡಬೇಕೆಂದಿಲ್ಲ..
ರಣರಂಗದಲಿ ವೀರರೊಡನೆ
ಸ್ವರ್ಗ ಸೇರುವ ಗತಿ ಇಂದು ನನಗಿಲ್ಲ
ಮೂಟೆಗಳ ಹೊತ್ತು ಬೆಟ್ಟ ಹತ್ತುವ
ದಿನಗಳು ಈಗಿಲ್ಲ
ಕಣ್ಗಾಪು ಕಟ್ಟಿ ಬಂಡಿಯನೇಕೆ ಎಳೆಯಲಿ..
ಬಂದಿವೆ ರಿಕ್ಷಾ ಟ್ರಾಕ್ಟರುಗಳು.
ಬೈಕು ಸ್ಕೂಟರುಗಳು..
ಯಾರದೋ ಪ್ರತಿಷ್ಟೆಗಾಗಿ..
ಯಾರೋ ಕಟ್ಟಿದ ಪಣದ ಹಣೆಬರಹವಾಗಿ
ಓಡಬೇಕೆಂದಿಲ್ಲ ಮೈದಾನದಲಿ..
ಇರುವರು ನನ್ನ ಬದಲಿಗೆ
ಸೆಹ್ವಾಗ್ ಧೋನಿಯರು
ದ್ರಾವಿಡ್ ತೆಂಡುಲ್ಕರರು...
Subscribe to:
Comments (Atom)